ಖಾನಾ ಒಬ್ಬ ಭಾರತೀಯ ಕವಿಯಿತ್ರಿ ಮತ್ತು ಪೌರಾಣಿಕ ಜ್ಯೋತಿಷಿ, ಇವರು ಮಧ್ಯಕಾಲೀನ ಬಂಗಾಳಿ ಭಾಷೆಯಲ್ಲಿ ಒಂಬತ್ತನೇ ಮತ್ತು ಹನ್ನೆರಡನೇ ಶತಮಾನದ ನಡುವೆ ಕೃತಿಗಳನ್ನು ರಚಿಸಿದ್ದಾರೆ. ಅವರು ಪಶ್ಚಿಮ ಬಂಗಾಳದ ಉತ್ತರ ೨೪ ಪರಗಣ ಜಿಲ್ಲೆಯ ಬರಸಾತ್‌ನಲ್ಲಿರುವ ದೆಯುಲಿಯಾ ( ಚಂದ್ರಕೇತುಗರ್, ಬೆರಚಂಪಾ ಬಳಿ) ಗ್ರಾಮದೊಂದಿಗೆ ಸಂಬಂಧ ಹೊಂದಿದ್ದಾರೆ ಎ೦ದು ತಿಳಿದು ಬ೦ದಿದೆ. ಬಂಗಾಳಿ ಸಾಹಿತ್ಯದಲ್ಲಿನ ಆರಂಭಿಕ ಸಂಯೋಜನೆಗಳಲ್ಲಿ ಖಾನಾರ್ ಬಚನ್ (ಅಥವಾ ವಚನ) (খনার বচন ) (ಅರ್ಥ "ಖಾನರ ಪದಗಳು") ಎಂದು ಕರೆಯಲ್ಪಡುವ ಅವರ ಕವನವು ಅದರ ಕೃಷಿ ಕುರಿತಾದ ವಿಚಾರಗಳಿಗೆ ಹೆಸರುವಾಸಿಯಾಗಿದೆ. ಇವರ ಸಣ್ಣ ದ್ವಿಪದಿಗಳು ಅಥವಾ ಕ್ವಾಟ್ರೇನ್‌ಗಳು ದೃಢವಾದ ಸಾಮಾನ್ಯ ಜ್ಞಾನವನ್ನು ಪ್ರತಿಬಿಂಬಿಸುತ್ತವೆ, ಉದ್ಯಮಕ್ಕೆ ಈ ಪೈನ್‌ನಂತೆ: ಥಕ್ತೇ ಬಲದ್ ನಾ ಕರೇ ಚಾಸ್ ತರ್ ದುಃಖ ಬಾರೋ ಮಾಸ್ "ಎತ್ತುಗಳನ್ನು ಹೊಂದಿರುವವನು, ಆದರೆ ಉಳುಮೆ ಮಾಡದವನು, ಅವನ ಈ ಸ್ಥಿತಿಯು ವರ್ಷದ ಹನ್ನೆರಡು ತಿಂಗಳು ಇರುತ್ತದೆ." == ದಂತಕಥೆ == ಖಾನಾರ ದಂತಕಥೆಯು (ಬೇರೆಡೆ ಲೀಲಾವತಿ ಎಂದೂ ಕರೆಯಲ್ಪಡುತ್ತದೆ) ಪ್ರಾಗ್ಜ್ಯೋತಿಶಪುರ ( ಬಂಗಾಳ / ಅಸ್ಸಾಂ ಗಡಿ) ಅಥವಾ ದಕ್ಷಿಣ ಬಂಗಾಳದ ಪ್ರಾಯಶಃ ಚಂದ್ರಕೇತುಗಢ್ (ಇಲ್ಲಿ ಖಾನಾ ಮತ್ತು ಮಿಹಿರ್ ಹೆಸರುಗಳೊಂದಿಗೆ ಸಂಬಂಧಿಸಿದ ಅವಶೇಷಗಳ ನಡುವೆ ಒಂದು ದಿಬ್ಬ ಪತ್ತೆಯಾಗಿದೆ) ಜೊತೆಗಿನ ಅವರ ಸಂಬಂಧದ ಸುತ್ತ ಕೇಂದ್ರೀಕೃತವಾಗಿದೆ. ಅವರು, ಚಂದ್ರಗುಪ್ತ ವಿಕ್ರಮಾದಿತ್ಯನ ಪ್ರಸಿದ್ಧ ನವರತ್ನ ಸಭೆಯಲ್ಲಿ ರತ್ನವಾಗಿದ್ದ, ಪ್ರಸಿದ್ಧ ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞ ವರಾಹಮಿಹಿರನ ಸೊಸೆಯಾಗಿದ್ದರು ಎ೦ದು ಹೇಳಲಾಗುತ್ತದೆ. ದೈವಜ್ಞ ವರಾಹಮಿಹಿರ್ (೫೦೫-೫೮೭), ವರಾಹ ಅಥವಾ ಮಿಹಿರ ಎಂದೂ ಕರೆಯಲ್ಪಡುವ, ಒಬ್ಬ ಭಾರತೀಯ ಖಗೋಳಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ ಮತ್ತು ಜ್ಯೋತಿಷಿ, ಉಜ್ಜಯಿನಿಯಲ್ಲಿ (ಅಥವಾ ಬಂಗಾಳ, ಕೆಲವು ದಂತಕಥೆಗಳ ಪ್ರಕಾರ) ಜನಿಸಿದರು. ಭಾರತೀಯ ಸಂಸತ್ತಿನ ಕಟ್ಟಡವು ಇತರ ಖಗೋಳಶಾಸ್ತ್ರಜ್ಞರೊ೦ದಿಗೆ ವರಾಹಮಿಹಿರ ಮತ್ತು ಆರ್ಯಭಟರ ಚಿತ್ರಗಳನ್ನು ಒಳಗೊಂಡಿದೆ. ಅವರ ಜೀವನದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಅವರು ದಕ್ಷಿಣ ಬಂಗಾಳದಿಂದ ಬಂದವರು ಎಂದು ಹೇಳಲಾಗುತ್ತದೆ. ಅಲ್ಲದೆ, ಚಂದ್ರಕೇತುಗಢದ ಅವಶೇಷಗಳಲ್ಲಿ ಖಾನಾ ಮತ್ತು ಮಿಹಿರ್ ಎಂಬ ದಿಬ್ಬವಿದೆ. ಖಾನಾ ವರಾಹನ ಸೊಸೆ ಮತ್ತು ಸ್ವತಃ ಪ್ರಸಿದ್ಧ ಜ್ಯೋತಿಷಿಯಾಗಿದ್ದಾರೆ. ಎಲ್ಲಾ ಸಾಧ್ಯತೆಗಳ ಪ್ರಕಾರ, ಅವರು ತಮ್ಮ ಜೀವನವನ್ನು ಬಂಗಾಳದಲ್ಲಿ ನಡೆಸಿದರು, ಆದರೆ ಅವರ ಜೀವನದ ಸುತ್ತಲೂ ಹಲವಾರು ದಂತಕಥೆಗಳು ಹಬ್ಬಿವೆ. ಒಂದು ದಂತಕಥೆಯ ಪ್ರಕಾರ, ಅವರು ಶ್ರೀಲಂಕಾದಲ್ಲಿ ಜನಿಸಿದರು ಮತ್ತು ಗಣಿತಜ್ಞ-ಖಗೋಳಶಾಸ್ತ್ರಜ್ಞ ವರಾಹಮಿಹಿರನನ್ನು ಮದುವೆಯಾದರು, ಆದರೆ ಖಾನಾ ವರಾಹಮಿಹಿರನ ಸೊಸೆ ಮತ್ತು ಒಬ್ಬ ನಿಪುಣ ಜ್ಯೋತಿಷಿ ಎಂದು ಹೆಚ್ಚು ವ್ಯಾಪಕವಾಗಿ ನಂಬಲಾಗಿದೆ, ಇದರಿಂದಾಗಿ ವರಾಹಮಿಹಿರನ ವೈಜ್ಞಾನಿಕ ವೃತ್ತಿಗೆ ಸಂಭವನೀಯ ಅಪಾಯವಾಗಿದೆ. ಆದಾಗ್ಯೂ, ಅವರು ತಮ್ಮ ಭವಿಷ್ಯವಾಣಿಗಳ ನಿಖರತೆಯಲ್ಲಿ ಅವನನ್ನು ಮೀರಿದರು, ಮತ್ತು ಕೆಲವು ಸಮಯದಲ್ಲಿ, ಅವರ ಪತಿ (ಅಥವಾ ಮಾವ) ಅಥವಾ ಅಲ್ಪಾವಧಿಯ ಕೆಲಸ ಮಾಡಲು ನೇಮಲಕಗೊ೦ಡ ವ್ಯಕ್ತಿ(ಅಥವಾ ಬಹುಶಃ ಖಾನಾ ಸ್ವತಃ ದೊಡ್ಡ ಒತ್ತಡದಲ್ಲಿ) ಅವರ ಅದ್ಭುತ ಪ್ರತಿಭೆಯನ್ನು ಮೌನಗೊಳಿಸಲು ಅವರ ನಾಲಿಗೆಯನ್ನು ಕತ್ತರಿಸಿಕೊ೦ಡರು. . ಇದು ಆಧುನಿಕ ಬಂಗಾಳಿ ಸ್ತ್ರೀವಾದದಲ್ಲಿ ಪ್ರತಿಧ್ವನಿಸುವ ವಿಚಾರವಾಗಿದ್ದು, ಮಲ್ಲಿಕಾ ಸೆಂಗುಪ್ತಾ ಅವರ ಈ ಕವಿತೆಯಲ್ಲಿ, ಖಾನಾ ಅವರ ಹಾಡು ಹೀಗಿದೆ : ಕೇಳು ಓ ಕೇಳು : ಖಾನಾ ಅವರ ಈ ಕಥೆಯನ್ನು ಗಮವಿಟ್ಟು ಕೇಳು ಮಧ್ಯಯುಗದಲ್ಲಿ ಬಂಗಾಳದಲ್ಲಿ ಮಹಿಳೆ ಖಾನಾ ವಾಸಿಸುತ್ತಿದ್ದರು, ನಾನು ಅವಳ ಜೀವನವನ್ನು ಹಾಡುತ್ತೇನೆ ಮೊದಲ ಬಂಗಾಳಿ ಮಹಿಳಾ ಕವಿ ಆಕೆಯ ನಾಲಿಗೆಯನ್ನು ಅವರು ಚಾಕುವಿನಿಂದ ಕತ್ತರಿಸಿದರು - ಮಲ್ಲಿಕಾ ಸೇನ್‌ಗುಪ್ತಾ, ಆಮ್ರಾ ಲಾಸ್ಯ ಅಮ್ರ ಲಾರೈ, ಟಿಆರ್. ಅಮಿತಾಭ ಮುಖರ್ಜಿ ಶ್ರೀ ಪಿಆರ್ ಸರ್ಕಾರ್ ಅವರ ಬಗ್ಗೆ ಹೀಗೆ ಬರೆಯುತ್ತಾರೆ: "ಆಕಾಶಕಾಯಗಳ ಸರ್ವವ್ಯಾಪಿ ಪ್ರಭಾವದ ಆಧಾರದ ಮೇಲೆ, ಜ್ಞಾನದ ಶಾಖೆಯು ದಿನನಿತ್ಯದ ಜೀವನದಲ್ಲಿ ಹುಟ್ಟಿಕೊಂಡಿತು. ಮತ್ತು ಈ ಜ್ಞಾನದ ಶಾಖೆಯು ಅದರ ಎಲ್ಲಾ ಹೂವುಗಳು, ಎಲೆಗಳು ಮತ್ತು ಕೊಂಬೆಗಳೊಂದಿಗೆ ಸುಂದರವಾಗಿ ಪೋಷಿಸಲ್ಪಟ್ಟಿತು, ರಾಶ್ ಅವರ ಪ್ರೀತಿಯ ಮಗಳು, ಬಂಕುರಾ / ಸೆಂಭುಮ್‌ನ ರಾಶಿ ವೈದ್ಯ ಜಾತಿಯ ಸಂತಾನ." ಶತಮಾನಗಳ ಮೂಲಕ, ಖಾನಾ ಅವರ ಸಲಹೆಯು ಗ್ರಾಮೀಣ ಬಂಗಾಳದಲ್ಲಿ (ಆಧುನಿಕ ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಬಿಹಾರದ ಕೆಲವು ಭಾಗಗಳು) ದೇವಾದೇಶದ ಸ್ಥಾನವನ್ನು ಪಡೆದುಕೊಂಡಿದೆ. ಅಸ್ಸಾಮಿ ಮತ್ತು ಒರಿಯಾದಲ್ಲಿ ಪ್ರಾಚೀನ ಆವೃತ್ತಿಗಳು ಸಹ ಅಸ್ತಿತ್ವದಲ್ಲಿವೆ. "ಸ್ವಲ್ಪ ಉಪ್ಪು, ಸ್ವಲ್ಪ ಕಹಿ, ಮತ್ತು ಯಾವಾಗಲೂ ನೀವು ತುಂಬಾ ತುಂಬುವ ಮೊದಲು ನಿಲ್ಲಿಸಿ" ಎಂಬ ಸಲಹೆಯನ್ನು ಸಮಯಾತೀತವೆಂದು ಪರಿಗಣಿಸಲಾಗುತ್ತದೆ. == ಜನಪ್ರಿಯ ಸಂಸ್ಕೃತಿ == ೧೫ ಜೂನ್ ೨೦೦೯ ರಂದು, ಭಾರತೀಯ-ಬಂಗಾಳಿ ದೂರದರ್ಶನ ಚಾನೆಲ್ ಝೀ ಬಾಂಗ್ಲಾ, ಖಾನಾ ಜೀವನವನ್ನು ಆಧರಿಸಿದ ಖೋನಾ ಎಂಬ ಟಿವಿ ಧಾರಾವಾಹಿಯನ್ನು ಪ್ರಸಾರ ಮಾಡಲು ಪ್ರಾರಂಭಿಸಿತು. ಈ ಪ್ರದರ್ಶನವು ಅವರು 'ಸಿಂಹಲ್' ( ಶ್ರೀಲಂಕಾ ) ನಲ್ಲಿ ಜನಿಸಿದರು ಎಂದು ಹೇಳುವ ದಂತಕಥೆಯನ್ನು ಅನುಸರಿಸುತ್ತದೆ. ೨೦೧೯ ರಲ್ಲಿ, ಕಲರ್ಸ್ ಬಾಂಗ್ಲಾ ಚಾನೆಲ್ ಖಾನಾ ಅವರ ಮಾತುಗಳು ಮತ್ತು ಆಕೆಯ ಮಾವ ವರಾಹ ಅವರೊಂದಿಗಿನ ಸಂಘರ್ಷಗಳನ್ನು ಆಧರಿಸಿ ಖಾನಾರ್ ಬಚನ್ ಎಂಬ ಹೊಸ ಧಾರಾವಾಹಿಯನ್ನು ಪ್ರಾರಂಭಿಸಿತು. == ಉಲ್ಲೇಖಗಳು ==